……ಹೋಗಿ ಬಿಡು

ನೋಡು-
ಕಣ್ಣು ತುಟಿ ಮೂಗು
ಕೈಯಿ ಮೈಯಿ
ಏನಿಲ್ಲದಿದ್ದರೂ
ಇದ್ದ ಹಾಗೆಯೇ ಕಾಣಿಸುವ
ಚಂದ್ರನನ್ನು ಕಡೆಯ ಬಾರಿ
ಎಂಬಂತೆ ನೋಡಿ ಬಿಡು.

ಬೆಂಕಿಯನ್ನು ಬೆಳಕನ್ನು
ಬಣ್ಣವನ್ನು ಬೆಡಗನ್ನು
ತುಂಬಿಕೊಂಡಿರುವ,
ನಿನ್ನೊಳಗೆ
ಬೆರಗನ್ನು ಭಯವನ್ನು
ಹುಟ್ಟಿಸಿದ
ಆಕಾಶವನ್ನು ಕಡೆಯ ಬಾರಿ
ಎಂಬಂತೆ ನೋಡಿ ಬಿಡು.

ನೀನು ಆಟವಾಡಿದ ನೆಲ
ನಿನಗೆ ಪಾಠ ಕಲಿಸಿದ ಹೊಲ
ನಿನ್ನಲ್ಲಿ ಪ್ರೀತಿ ಹುಟ್ಟಿಸಿದ ಹುಡುಗ
ನಿನಗೆ ನೀತಿ ಬೋಧಿಸಿದ ತಂದೆ
ಎಲ್ಲರನ್ನೂ ಕಡೆಯ ಬಾರಿ
ಎಂಬಂತೆ ನೋಡಿ ಬಿಡು.

ಹೋಗು-
ಹುಲ್ಲು ಪೊದೆ ಮರಗಿಡಗಳಲ್ಲಿ
ಹುದುಗಿರುವ
ಹೂವುಗಳನ್ನು ಅರಳಿಸು
ಹಾಡುಗಳನ್ನು ಎಬ್ಬಿಸು.

ನಿನ್ನ ಅಹಂಕಾರನ್ನು
ನಿನ್ನ ಪ್ರೀತಿಯನ್ನು
ನಿನ್ನ ದುಃಖವನ್ನು
ಇಲ್ಲೆ ಈ ದಡದಲ್ಲಿರಿಸಿ
ತಣ್ಣಗೆ, ಕಡಲಿನೊಳಗೆ
ನದಿಯ ಹಾಗೆ
ನಡೆದು ಹೋಗಿಬಿಡು…..


Previous post ಇನ್ನೊಂದು ನಾಳೆ
Next post ನೆಮ್ಮದಿಗೆ ಹಾಕಿದ ಅರ್ಜಿ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys